Karnataka Animal Subsidy Scheme: ಪಶುಪಾಲನೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು ಯಾವುವು? ಇಲ್ಲಿದೆ ನೋಡಿ ಮಾಹಿತಿ.

Karnataka Animal Subsidy Scheme: ಪಶುಪಾಲನೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು ಯಾವುವು? ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಕೃಷಿ ಜೊತೆಗೆ ಪಶುಪಾಲನೆಗೂ ಕೂಡ ಗ್ರಾಮೀಣ ಜೀವನ ಅಧಿಪಾಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಹೈನುಗಾರಿಕೆ, ಕುರಿ ಮೇಕೆ ಸಾಕಾಣಿಕೆ, ನಾಟಿ ಕೋಳಿ ಹಾಗೂ ಮೇವು ಉತ್ಪಾದನೆ ಅಂತಹ ಚಟುವಟಿಕೆಗಳು ಈಗ ಗ್ರಾಮೀಣ ಕುಟುಂಬಗಳಿಗೆ ನಿರಂತರವಾಗಿ ಆದಾಯವನ್ನು ನೀಡುವ ಮೂಲಗಳಾಗಿವೆ.

Karnataka Animal Subsidy Scheme

ಈ ಒಂದು ಕಾರಣಗಳಿಂದಾಗಿ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಶು ಪಾಲಕರಿಗೆ ಈಗ ಆರ್ಥಿಕವಾಗಿ ನೆರವನ್ನು ನೀಡುವ ಉದ್ದೇಶದಿಂದಾಗಿ ಹಲವಾರು ರೀತಿಯ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಹಾಗಿದ್ದರೆ ಈಗ ಪಶುಪಾಲನೆ ಇಲಾಖೆಯಲ್ಲಿ ಇರುವಂತಹ ಯೋಜನೆಗಳ ಮಾಹಿತಿಯನ್ನು ತಿಳಿಯೋಣ ಬನ್ನಿ.

ನಾಟಿ ಕೋಳಿ ಮರಿಗಳ ಉಚಿತ ವಿತರಣೆ

ಈಗ ಸ್ನೇಹಿತರೆ ಗ್ರಾಮೀಣ ಮಹಿಳೆಯರನ್ನು ಸ್ವಾಲಂಬಿಯಾಗಿ ಮಾಡುವ ಉದ್ದೇಶದಿಂದಾಗಿ ಈಗ ಪ್ರತಿ ಸದಸ್ಯರಿಗೆ 20 ನಾಟಿ ಕೋಳಿ ಮರಿಗಳನ್ನು ಈಗ ಸರ್ಕಾರ ಉಚಿತವಾಗಿ ನೀಡುತ್ತಾ ಇದೆ. ಅಷ್ಟೇ ಅಲ್ಲದೆ ಸುಮಾರು 4 ರಿಂದ 6 ವಾರಗಳ ವಯಸ್ಸಿನ ಲಸಿಕೆ ಹಾಕಿದ ಕೋಳಿ ಮರಿಗಳನ್ನು ಅರ್ಹ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಈಗ ವಿತರಣೆ ಮಾಡಲಾಗುತ್ತದೆ.

ಜಾನುವಾರುಗಳ ಸಾವಿಗೆ ಪರಿಹಾರ

ಈಗ ಸ್ನೇಹಿತರೆ ರೈತರಿಗೆ ಆರ್ಥಿಕವಾಗಿ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಈಗ ಎಮ್ಮೆ, ಹಸು, ಎತ್ತು, ಹೋರಿ ಇತ್ಯಾದಿಗಳು ಅಕಸ್ಮಾತಾಗಿ ಸಾವಿಗೆ ಈಡಾದರೆ ಅವುಗಳ ಸಾವಿಗೆ ಗರಿಷ್ಠ ಒಂದು ಲಕ್ಷದವರೆಗೆ ಪರಿಹಾರವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಆರು ತಿಂಗಳ ಮೇಲಿನ ಜಾನುವಾರುಗಳಿಗೆ ಮಾತ್ರ ಈ ಒಂದು ಪರಿಹಾರ ಅನ್ವಯವಾಗುತ್ತದೆ.

ಇದನ್ನು ಓದಿ : Udyogini Yojane Subsidy Loan: ಈ ಯೋಜನೆ ಅಡಿಯಲ್ಲಿ ಈಗ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ! ಈ ಕೂಡಲೇ ಮಾಹಿತಿಯನ್ನು ತಿಳಿಯಿರಿ.

ಕುರಿ ಮೇಕೆ ಸಾಕಾಣಿಕೆ ಯೋಜನೆ

ಈಗ ಸ್ನೇಹಿತರೆ ಕರ್ನಾಟಕವು ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ವತಿಯಿಂದ ಈಗ ನೊಂದಾಯಿತ ಕುರಿ ಸಾಕಾಣಿಕೆ ದಾರರಿಗೆ ಆರು ತಿಂಗಳ ಮೇಲ್ಪಟ್ಟ ಕುರಿ ಅಥವಾ ಮೇಕೆಗಳಿಗೆ ಅಕಸ್ಮಾತಾಗಿ ಸಾವಿಗೆ ಇಡಾದರೆ ಅವುಗಳಿಗೆ 5000 ಹಾಗೂ 4 ರಿಂದ 6 ತಿಂಗಳ ಕುರಿ ಮೇಕೆಗಳ ಸಾವಿಗೆ 3500 ಪರಿಹಾರವನ್ನು ನೀಡಲಾಗುತ್ತದೆ.

ಮೇವು ಕತ್ತರಿಸುವ ಯಂತ್ರ ಯೋಜನೆ

ಈಗ ಸ್ನೇಹಿತರೆ ಮೇವು ಸಂಸ್ಕರಣೆ ಸುಲಭ ಗೊಳಿಸುವ ಉದ್ದೇಶದಿಂದಾಗಿ ಈಗ ಹೈನುಗಾರರು ಮತ್ತು ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಈಗ ಶೇಕಡ 50ರಷ್ಟು ಸಹಾಯಧನದಲ್ಲಿ ಈಗ ಈ ಒಂದು ಮೇವು ಕತ್ತರಿಸುವ ಯಂತ್ರವನ್ನು ವಿತರಣೆ ಮಾಡಲಾಗುತ್ತದೆ.

ಉಚಿತ ಮೇವಿನ ಬೀಜಗಳ ವಿತರಣೆ

ಈಗ ಹೈನುಗಾರ ರೈತರನ್ನು ಪ್ರೋತ್ಸಾಹ ಮಾಡುವ ಉದ್ದೇಶದಿಂದ ಮೇವು ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಹೀಗೆ ಉಚಿತವಾಗಿ ಮೇವಿನ ಬೀಜಗಳ ಕಿಟ್ ವಿತರಣೆ ಮಾಡಲಾಗುತ್ತಿದೆ.

ಉಚಿತ ಲಸಿಕೆ ಕಾರ್ಯಕ್ರಮ

ಈಗ ಸ್ನೇಹಿತರೆ ಈ ಒಂದು ಪಶುಗಳ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದಾಗಿ ಕಾಲುಬಾಯಿ ರೋಗ, ಕಂಡು ರೋಗ, ಪಿಪಿಆರ್, ಹಂದಿ ಜ್ವರ ಇನ್ನು ಹಲವಾರು ರೀತಿಯ ರೋಗಗಳಿಗೆ ಈಗ ಪಶುಪಾಲನೆ ಇಲಾಖೆ ಉಚಿತ ಲಸಿಕೆಯನ್ನು ನೀಡಲು ಮುಂದಾಗಿದೆ.

ಇದನ್ನು ಓದಿ : Today Gold Rate Karnataka: ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಏನು?

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ಸ್ನೇಹಿತರೆ ಈ ಒಂದು ಮೇಲ್ಕಾಣಿಸಿದ ಯೋಜನೆಗಳಿಗೆ ಸ್ವಂತ ಪಶುಪಾಲನೆ ಇಲಾಖೆ ಋತುಮಾನಕ್ಕೆ ಅನುಗುಣವಾಗಿ ಅಭಿಯಾನದ ಮೂಲಕ ರೈತರಿಗೆ ಈಗ ಈ ಒಂದು ಯೋಜನೆಗಳ ಸಂಪೂರ್ಣ ಲಾಭ ಗಳನ್ನು ಪಡೆದುಕೊಳ್ಳಬಹುದು.

ನೀವು ನಿಮ್ಮ ಹತ್ತಿರ ಇರುವಂತಹ ತಾಲೂಕು ಪಶುಪಾಲನೆ ಇಲಾಖೆ ಕಛೇರಿ ಹಾಗೂ ಕುರಿ ಸೊಸೈಟಿಗೆ ಭೇಟಿಯನ್ನು ನೀಡಿ. ನಿಮ್ಮ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಲಾಭಗಳನ್ನು ಈಗ ಪಡೆದುಕೊಳ್ಳಬಹುದು.

error: Content is protected !!