Crop Insurance Status- ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ನಾವು ಬೆಳೆ ವಿಮೆ ಯೋಜನೆಯ ಸಂಬಂಧಿತ ಮಾಹಿತಿ ನೀಡುತ್ತಿದ್ದೇವೆ. ಸರ್ಕಾರದ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡ ರೈತರು ತಮ್ಮ ಅರ್ಜಿಯ ಸ್ಥಿತಿ, ಹಣ ಜಮಾ ಆಗಿರುವದೆಯೇ ಎಂಬುದನ್ನು ತಮ್ಮ ಮೊಬೈಲ್ ಮೂಲಕ ಹೇಗೆ ಪರಿಶೀಲಿಸಬಹುದು ಎಂಬುದರ ವಿವರಗಳನ್ನು ಇಲ್ಲಿ ತಿಳಿಸಿದೆವು. ಈ ಮಾಹಿತಿಯನ್ನು ನಿಮ್ಮ ನೆರೆಹೊರೆಯ ರೈತ ಬಂಧುಗಳಿಗೆ ಹಂಚಿಕೊಳ್ಳಿ.
Crop Insurance Status- ಬೆಳೆ ವಿಮೆ ಸ್ಟೇಟಸ್
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಪ್ರತಿ ವರ್ಷ ರೈತರು ತಮ್ಮ ಬೆಳೆಗಳಿಗೆ ವಿಮೆ (Crop Insurance Status)ಮಾಡಿಸಿಕೊಳ್ಳಬಹುದು. ಈ ಯೋಜನೆಯ ಉದ್ದೇಶ ಕೃಷಿಕರಿಗೆ ಪ್ರಾಕೃತಿಕ ಅನಾಹುತಗಳಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ಒದಗಿಸುವುದಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳ ಹೆಸರು ಮತ್ತು ವಿವರಗಳನ್ನು ಆಧರಿಸಿ ವಿಮೆ ಮಾಡಿಸಿಕೊಂಡು, ನಂತರ ಹಾನಿಯಾದ ಸಂದರ್ಭದಲ್ಲಿ ಪರಿಹಾರ ಪಡೆಯಬಹುದು. ಈ ಯೋಜನೆಯ ಅಡಿಯಲ್ಲಿ ರೈತರು ಕಡಿಮೆ ವೆಚ್ಚದಲ್ಲಿ ವಿಮೆ ಪಡೆದು ಹೆಚ್ಚು ಲಾಭ ಪಡೆಯುತ್ತಾರೆ.
ಮುಂದಿನ ಏಳು ದಿನಗಳವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ!
ಹಾನಿ ಸಂಭವಿಸಿದ ಬಳಿಕ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಅರ್ಜಿ ಸಲ್ಲಿಸಬೇಕು. ನಂತರ ಸಂಬಂಧಿತ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಮೌಲ್ಯಮಾಪನ ಮಾಡಿ ವರದಿ ನೀಡುತ್ತಾರೆ. ಈ ಪ್ರಕ್ರಿಯೆಯ ನಂತರ, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರದ ಹಣ ಜಮಾ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಹಣ ವರ್ಷದಲ್ಲೊಂದು ಬಾರಿಗೆ, ಮೇ ಅಥವಾ ಆಗಸ್ಟ್ ತಿಂಗಳಲ್ಲಿ ಜಮಾ ಮಾಡಲಾಗುವುದು.
ರೈತರು ತಮ್ಮ ಬೆಳೆ ವಿಮೆಯ ಸ್ಥಿತಿಯನ್ನು ಅರಿಯಲು ರಾಜ್ಯ ಸರ್ಕಾರದ ‘ಸಂರಕ್ಷಣೆ’ ಎಂಬ ಪೋರ್ಟಲ್ನ್ನು ಬಳಸಬಹುದು. ಈ ವೆಬ್ಸೈಟ್ಗೆ ಭೇಟಿ ನೀಡಿದ ಮೇಲೆ, ರೈತರು ಇನ್ಸೂರೆನ್ಸ್ (Crop Insurance Status) ಇಯರ್ ಅನ್ನು ಆಯ್ಕೆ ಮಾಡಬೇಕು – ಉದಾಹರಣೆಗೆ 2024-25. ನಂತರ ಖರೀಫ್ ಅಥವಾ ಮುಂಗಾರು ಹಂಗಾಮು ಆಯ್ಕೆ ಮಾಡಿ, ‘Go’ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ರೇಷನ್ ಕಾರ್ಡ್ ಇ-ಕೆವೈಸಿ ಕೊನೆಯ ದಿನಾಂಕ! ಏಪ್ರಿಲ್ 30ರ ನಂತರ ಪಡಿತರ ಚೀಟಿ ಬಂದ್?
ಅದಿನಂತರ, ರೈತರು ತಮ್ಮ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ನೋಂದಾಯಿತ ಸಂಖ್ಯೆಯನ್ನು ನಮೂದಿಸಿ, ಕೆಳಗಿನ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ ‘ಸರ್ಚ್’ ಬಟನ್ನ್ನು ಕ್ಲಿಕ್ ಮಾಡಬೇಕು. ಈ ಪ್ರಕ್ರಿಯೆಯ ನಂತರ ರೈತರಿಗೆ ತಮ್ಮ ಅರ್ಜಿಯ ಸ್ಥಿತಿ, ವಿಮಾ ಕಂಪನಿಯ ಹೆಸರು, ಅರ್ಜಿದಾರರ ಹೆಸರು ಮತ್ತು ಇತರ ಮಾಹಿತಿಗಳು ತೋರಿಸಲಾಗುತ್ತದೆ.
ಸ್ಟೇಟಸ್ ಅನ್ನು ಇನ್ನೂ ಹೆಚ್ಚಿನ ವಿವರವಾಗಿ ನೋಡಲು ‘Select’ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ‘UTR Details’ ವಿಭಾಗದಲ್ಲಿ ದಿನಾಂಕ ಮತ್ತು ವರ್ಷವನ್ನು ಆಯ್ಕೆಮಾಡಿ. ಈ ಮೂಲಕ ನೀವು ಯಾವ ದಿನಾಂಕದಲ್ಲಿ ಎಷ್ಟು ಹಣ ಜಮಾ ಆಗಿದೆ, ಯಾವ ಖಾತೆಗೆ ಹಣ ಹೋಗಿದೆ, ಬ್ಯಾಂಕ್ ವಿವರಗಳು ಮೊದಲಾದ ಎಲ್ಲ ಮಾಹಿತಿಗಳನ್ನು ನೋಡಿಯೊಳ್ಳಬಹುದು.
ಇದೇ ರೀತಿಯ ಸರಕಾರದ ಯೋಜನೆಗಳು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮಾಹಿತಿ, ಉದ್ಯೋಗ ನೇಮಕಾತಿ ಮತ್ತು ಇತರೆ ಮುಖ್ಯ ಸುದ್ದಿಗಳ ಬಗ್ಗೆ ತ್ವರಿತವಾಗಿ ತಿಳಿದುಕೊಳ್ಳಲು ನೀವು ವಾಟ್ಸಪ್ ಮತ್ತು ಟೆಲಿಗ್ರಾಂ ಚಾನಲ್ಗಳಿಗೆ ಸಂಪರ್ಕಿಸಿ. ಈ ಮೂಲಕ ರೈತರು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಅರಿವು ಪಡೆದು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬಹುದು.